ಮುದಿ ಪೆನ್‌ಷನ್‌ದಾರನ ಅಳಲು

ಮಳೆಗೆ ಸಿಗದಂತೆ ನಿಂತಿದ್ದರೂ ಈಗ
ಮುರಿದೊಂದು ಮರದ ಕೆಳಗೆ,
ಎಲ್ಲ ಕುರ್‍ಚಿಗೂ ಮೊದಲು ಬೆಚ್ಚನೆಯ ಜಾಗದಲಿ
ಕಾದಿರುತ್ತಿತ್ತೊಂದು ಕುರ್‍ಚಿ ನನಗೆ
ರಾಜಕಾರಣ, ಪ್ರೇಮ ಇತ್ಯಾದಿ ಚರ್‍ಚಿಸುವ ಗೋಷ್ಠಿಯೊಳಗೆ,
ಕಾಲ ಏಕಾ‌ಏಕಿ ನನ್ನ ಪರಿವರ್‍ತಿಸುವ ಮುಂಚೆ ಹೀಗೆ.

ಭಲ್ಲೆಗಳ ಸಿದ್ಧಮಾಡುತ್ತಿದ್ದರೂ ಹುಡುಗರು
ಮತ್ತೊಮ್ಮೆ ಯಾವುದೋ ಸಂಚಿಗೆ,
ಹುಚ್ಚು ಪೋಕರಿಗಳು ದಬ್ಬಾಳಿಕೆಯ ಜರಿದು
ಹಳಿದರೂ ಮನ ಬಂದ ಹಾಗೆ,
ನನ್ನ ಯೋಚನೆಯೆಲ್ಲ ನನ್ನ ಬದಲಿಸಿಬಿಟ್ಟ
ಕಾಲಕೌಶಲ್ಯದ ಬಗೆಗೆ.

ಮುರಿದ ಈ ಮರದ ಕಡೆ ದೃಷ್ಟಿ ಚೆಲ್ಲುವ ಹೆಣ್ಣು
ಇಲ್ಲ ಒಂದೂ,
ನಾನೊಲಿದ ಚೆಲುವೆಯರು ಮಾತ್ರ ನೆನಪಿನಲಿ
ಮಾಸಿಲ್ಲ ಇಂದೂ;
ಹೀಗೆ ಪರಿವರ್‍ತಿಸಿದ ಕಾಲನ ಮುಖಕ್ಕೆ
ಉಗಿವೆ ಥೂ ಎಂದು.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಮೂ ಶ್ಯಾಮೂ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೨

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys